ಸಿಡಿ ಬಗ್ಗೆ ಅಲ್ಲಿ ಇಲ್ಲಿ ಮಾತನಾಡಬೇಡಿ ಎನೆ ಇದ್ರೂ ದೆಹಲಿಗೆ ಹೋಗಿ ನನ್ನ ಮೇಲೆ ಹೈಕಮಾಂಡಗೆ ದೂರು ಕೊಡಿ ಎಂದು ಯತ್ನಾಳಗೆ ಟಾಂಗ್ ಕೊಟ್ಟ ಯಡಿಯೂರಪ್ಪ..
ದಾವಣಗೆರೆ : ಸಿಎಂ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೆ ಇಗ ರಾಜ್ಯದಲ್ಲಿ ಮೂಲ ಬಿಜೆಪಿಗರು ಸಿಎಂ ಯಡಿಯೂರಪ್ಪ ವಿರುದ್ದ ತಿರುಗಿ ಬಿದ್ದಿದ್ದಾರೆ..ಇನ್ನು ಬಸನಗೌಡ ಪಾಟೀಲ ಯತ್ನಾಳ ಅವರಂತೂ ಸಿಡಿ ಬಾಂಬ್ ಇದೆ ಎಂದು ಯಡಿಯೂರಪ್ಪ ಅವರನ್ನ ಬ್ಲ್ಯಾಕ್ ಮೇಲ್ ಮಾಡಿ ಸಚಿವರಾಗಿದ್ದಾರೆ..ಎಂದು ಯತ್ನಾಳ ನಿನ್ನೆ ಸಿಎಂ ವಿರುದ್ದ ಕಿಡಿಕಾರಿದ್ದರು..
ಧಾವಣಗೇರಿಯಲ್ಲಿ ಮಾತನಾಡಿದ ಸಿಎಂ ಯಡಿಯೂರಪ್ಪ ಅವರು ನನ್ನ ಇತಿಮಿತಿಯಲ್ಲಿ ಸಚಿವ ಸಂಪುಟ ವಿಸ್ತರಣೆ ಮಾಡಿದ್ದೇನೆ ಕೇಂದ್ರದ ನಾಯಕರ ಅಪೇಕ್ಷಯಂತೆ ಒಂದನ್ನು ಖಾಲಿ ಇಟ್ಟಿದ್ದೇನೆ.
12 ಜನ ಶಾಸಕರು ಅಸಮಾಧಾನ ಗೊಂಡಿದ್ದಾರೆ..ನಿಜಾ ಇಲ್ಲಸಲ್ಲದ ಆರೋಪ ಮಾಡುತ್ತಿದ್ದಾರೆ..ಅರೋಪ ಮಾಡುವವರು ಕೇಂದ್ರದ ನಾಯಕರ ಬಳಿ ದೂರು ಕೊಡಲಿ..ಗೊಂದಲವುಂಟು ಮಾಡುವುದು ಶಿಸ್ತಿಗೆ ಭಂಗ ತರುವುದು ಬೇಡ..ಜೊತೆಗೆ ಪಕ್ಷದಲ್ಲಿ ಅದು ನಡೆಯುವುದಿಲ್ಲ.ಯಾರೇ ಏನೇ ಹೇಳಿದ್ರು ಕೇಂದ್ರದ ನಾಯಕರ ಆರ್ಶೀವಾದ ಇದೆ ನಮ್ಮ ಮೇಲೆ..ಸಿಡಿ ಬಿಡುಗಡೆ ಬಗ್ಗೆ ಹೆದರುವ ಬಗ್ಗೆ ಅಗತ್ಯವಿಲ್ಲ ಎಂದು ಯತ್ನಾಳ್ ಗೆ ಸಿಎಂ ಯಡಿಯೂರಪ್ಪ ಅವರು ಟಾಂಗ್ ಕೊಟ್ಟಿದ್ದಾರೆ ಯಾರೇ ಎನೇ ಇದ್ದರು ಕೇಂದ್ರ ನಾಯಕರಿಗೆ ದೂರು ಕೊಡಿ ಅದನ್ನ ನಾನು ಎದುರಿಸುವೆ ಇನ್ನು ಎರಡು ಕಾಲು ವರ್ಷ ರಾಜ್ಯದ ಅಭಿವೃದ್ಧಿ ಕಡೆ ಗಮನ ಕೊಡಬೇಕಿದೆ ನಾನು ಈ ತಿಂಗಳ ಅಂತ್ಯದಲ್ಲಿ ಬಜೆಟ್ ಅಧಿವೇಶನ ಇದೆ..ಮಾರ್ಚ್ ಗೆ ಬಜೆಟ್ ಮಂಡನೆ ಮಾಡಲಿದ್ದೆನೆ. ರೈತ ಪರ ಬಜೆಟ್ ಮಂಡನೆಯಾಗಲಿದೆ..ಎಂದು ಯಡಿಯೂರಪ್ಪ ಅವರು ವಿರೋಧಿ ಬಣಕ್ಕೆ ಚಾಟಿ ಏಟು ಕೊಟ್ಡಿದ್ದಾರೆ..
ಸಿಡಿ ಬಗ್ಗೆ ಅಲ್ಲಿ ಇಲ್ಲಿ ಮಾತನಾಡಬೇಡಿ ಎನೆ ಇದ್ರೂ ದೆಹಲಿಗೆ ಹೋಗಿ ನನ್ನ ಮೇಲೆ ಹೈಕಮಾಂಡಗೆ ದೂರು ಕೊಡಿ ಎಂದು ಯತ್ನಾಳಗೆ ಟಾಂಗ್ ಕೊಟ್ಟ ಯಡಿಯೂರಪ್ಪ..
Reviewed by News10Karnataka Admin
on
January 14, 2021
Rating:

No comments: