ಬಾಗಲಕೋಟೆ : ಜನೇವರಿ 1ರಿಂದ ಶಾಲೆ ಆರಂಭಂದ ಬಗ್ಗೆ ರಾಜ್ಯ ಸರ್ಕಾರ ನಿರ್ಧಾರ ಮಾಡಿದ್ದು ಸ್ವಾಗತಾರ್ಹ, ಎಂದು ಬಾಗಲಕೋಟೆಯಲ್ಲಿ ಡಿಸಿಎಂ ಗೋವಿಂದ ಕಾರಜೋಳ ಹೇಳಿದ್ದಾರೆ ಸಿಎಂ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ , ಶಿಕ್ಷಣ ತಜ್ಞರು, ಅಧಿಕಾರಿಗಳು ಸೇರಿ ತೀರ್ಮಾನ ಮಾಡಿದ್ದಾರೆ ಜನೇವರಿಯಿಂದ ಮೊದಲ ಹಂತವಾಗಿ ಎಸ್ ಎಸ್ ಎಲ್ ಸಿ, ದ್ವಿತೀಯ ಪಿಯುಸಿ ಶಾಲಾ ಕಾಲೇಜು ಆರಂಭವಾಗಲಿದೆ, ಶ್ರೀಮಂತರ ಮಕ್ಕಳು ಟ್ಯೂಷನ್ ಗೆ ಹೋಗಿ,ಕಲಿಕೆ ಮುಂದುವರೆಸಿದ್ದಾರೆ, ಬಡ ಮಕ್ಕಳಿಗೆ ಬಹಳಷ್ಟು ತೊಂದರೆ ಆಗಿತ್ತು ಕೋವಿಡ್ ಕಡಿಮೆ ಆಗಿದೆ ಆದರೆ ಪೂರ್ಣವಾಗಿ ನಿಂತಿಲ್ಲ
ಹೀಗಾಗಿ ಪೋಷಕರು ಮಕ್ಕಳ ಬಗ್ಗೆ ಕೊರೋನಾ ಮುಂಜಾಗ್ರತಾ ಕ್ರಮವಹಿಸಬೇಕಿದೆ. ಇನ್ನು ಪೋಷಕರು ಸರ್ಕಾರ,ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ ಮಾರ್ಗಸೂಚಿಯಂತೆ ನಡೆದುಕೊಳ್ಳಲು ಸೂಚಿಸಿದೆ..ಇದಕ್ಕೆ ಪೋಷಕರು ಸಹಕರಿಸಬೇಕು ಎಂದು ಡಿಸಿಎಂ ಕಾರಜೋಳ ಹೇಳಿದ್ದಾರೆ.
ಸಿಎಂ ಬಿಎಸ್ ವೈಗೆ ಡಿಸಿಎಂ ಗೋವಿಂದ ಕಾರಜೋಳ ಎನ್ ಅಂದ್ರು ಗೊತ್ತಾ..?
Reviewed by News10Karnataka Admin
on
December 19, 2020
Rating:

No comments: