ಮಂಗಳೂರು : ವಿಧಾನ ಪರಿಷತ್ ನಲ್ಲಿ ಕಾಂಗ್ರೆಸ್ ಸದಸ್ಯರ ತಳ್ಳಾಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮಂಗಳೂರಿನಲ್ಲಿ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ ಕಟೀಲ್ ಕಾಂಗ್ರೆಸ್ ವಿರುದ್ದ ಕಿಡಿ ಕಾರಿದ್ದಾರೆ.
ಪರಿಷತ್ ನಲ್ಲಿ ಕಾಂಗ್ರೆಸ್ ಗೂಂಡಾಗಿರಿ ಮಾಡಿ ರಾಜ್ಯದ ಜನತೆಗೆ ಮಾಡಿದೆ.ಹಿರಿಯರ ಮಾರ್ಗದರ್ಶನದಲ್ಲಿ ವಿಧಾನಪರಿಷತ್ ನಡೆಯುತ್ತಿದೆ.ಉಪ ಸಭಾಪತಿಗಳು ಪೀಠದಲ್ಲಿ ಕುಳಿತ ಸಂದರ್ಭದಲ್ಲಿ ಅವರ ಮೇಲೆ ಹಲ್ಲೆ ಮಾಡಿ ದಾಂಧಲೆ ಎಸಗಲಾಗಿದೆ.ಅವ್ರನ್ನ ಪೀಠದಿಂದ ಎತ್ತಿ ಹೊರಗೆ ಹಾಕುವ ಗೂಂಡಾಗಿರಿ ಕಾಂಗ್ರೆಸ್ ಮಾಡಿದೆ.ಅಲ್ಲದೇ ಪರಿಷತ್ ಸಭಾಪತಿಗಳ ಮೇಲೆ ಅವಿಶ್ವಾಸ ನಿರ್ಣಯ ಆಗಿದೆ.ಅದು ಆದಮೇಲೆ ಉಪಸಭಾಪತಿ ಕೂರಬೇಕು ಬಾಕಿ ಎಲ್ಲಾ ಬಿಲ್ ಗಳ ಬಗ್ಗೆ ಚರ್ಚೆ ಮಾಡಬೇಕು ಹಾಗಾಗಿ ಜೆಡಿಎಸ್ ಉಪಸಭಾಪತಿ ಕೂತಿದ್ದಾರೆ.ಕಾಂಗ್ರೆಸ್ ನವರು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದೆ ಹಾಗಾಗಿ ಕಾಂಗ್ರೆಸ್ ಅಧ್ಯಕ್ಷರು ಹಾಗೂ ನಾಯಕರು ಕ್ಷಮೇ ಯಾಚಿಸಬೇಕು ಎಂದು ವಾಗ್ದಾಳಿ ನಡೆಸಿದ್ದಾರೆ....
ಕಾಂಗ್ರೆಸ್ ವಿರುದ್ದ ಕಿಡಿ ಕಾರಿದ ಬಿಜೆಪಿ ರಾಜ್ಯಧ್ಯಕ್ಷ ನಳೀನ್ ಕುಮಾರ ಕಟೀಲ್..ವಾಗ್ದಾಳಿ..ಎನ್ ಗೊತ್ತಾ..?
Reviewed by News10Karnataka Admin
on
December 15, 2020
Rating:

No comments: