ಧಾರವಾಡ : ಗ್ರಾಮ ಪಂಚಾಯತ ಚುನಾವಣೆಗೆ ಸ್ಪರ್ದೆ ಮಾಡಿದ ಅಭ್ಯರ್ಥಿ ನೇಣಿಗೆ ಶರಣಾಗಿರುವ ಘಟನೆ ಧಾರವಾಡ ಜಿಲ್ಲೆಯ, ಧಾರವಾಡ ತಾಲೂಕಿನ ಗರಗ ಗ್ರಾಮದಲ್ಲಿ ಘಟನೆ ನಡೆದಿದೆ ಗರಗ ಗ್ರಾಮದ ವಾರ್ಡ್ ನಂಬರ 2 ರಲ್ಲಿ ಸ್ಪರ್ಧೆ ಮಾಡಿದ್ದ ದಾಮೋದರ ಯಲಿಗಾರ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.ಇಂದು ಬೆಳಿಗ್ಗೆಯಿಂದ ಜಿಲ್ಲೆಯಲ್ಲಿ ಗ್ರಾಮ ಪಂಚಾಯತಗೆ ಮೊದಲನೇಯ ಹಂತದಲ್ಲಿ ಚುನಾವಣೆ ನಡೆಯುತ್ತಿದ್ದು ಗರಗ ಗ್ರಾಮ ಪಂಚಾಯತಗೂ ಕೂಡಾ ಮತದಾನ ನಡೆಯುತ್ತಿದೆ.
ಆದರೆ ಆತ ಶಾಸಕ ಅಮೃತ ದೇಸಾಯಿ ಅವರ ಆಪ್ತನಾಗಿದ್ದ ದಾಮೋದರ ಯಲಿಗಾರ ಇತ ಚುಣಾವಣೆಯಲ್ಲಿ ಸ್ಪರ್ದೆ ಮಾಡಿದ್ದ ಚುಣಾವಣೆಯನ್ನ ಎದುರಿಸಬೇಕಿದ್ದ ಇತ ಸಾವನ್ನಪ್ಪಿದ್ದಾನೆ..
ಇನ್ನುಈ ಬಗ್ಗೆ ಪ್ರತಿಕ್ರಿಯೇ ಮಾಡಿದ ಜಿಲ್ಲಾಧಿಕಾರಿ ನಿತೀಶ ಪಾಟೀಲ್ ಅವರು ನನ್ನ ಗಮನಕ್ಕೆ ಬಂದಿದೆ, ಸ್ಥಳಕ್ಕೆ ತಹಶಿಲ್ದಾರ ಬೇಟಿ ನೀಡಿ ಆತ ಯಾಕೆ ಆತ್ಮಹತ್ಯೆ ಮಾಡಿಕ್ಕೊಂಡಿದ್ದಾನೆ ಎಂಬುದರ ಬಗ್ಗೆ ಪೋಲಿಸರು ಮತ್ತು ತಹಶಿಲ್ದಾರ ಅವರು ಮಾಹಿತಿಯನ್ನ ಕಲೇ ಹಾಕುತ್ತಿದ್ದಾರೆ...ಸ್ಥಳಕ್ಕೆ ಗರಗ ಪೋಲಿಸ್ ರು ಪ್ರಕರಣವನ್ನ ದಾಖಲಿಸಿಕ್ಕೊಂಡು ತನಿಖೆಯನ್ನ ಆರಂಭಿಸಿದ್ದಾರೆ...
ಗ್ರಾಮ ಪಂಚಾಯತಿ ಅಭ್ಯರ್ಥಿ ನೇಣಿಗೆ ಶರಣಾಗಿದ್ಯಾಕೆ...ಇಲ್ಲಿದೆ ಪುಲ್ ಡಿಟೆಲ್...
Reviewed by News10Karnataka Admin
on
December 22, 2020
Rating:

No comments: