ಮೈಸೂರು : ಗ್ರಾಮ ಪಂಚಾಯತಿ ಚುನಾವಣೆ ಹಿನ್ನಲೆಯಲ್ಲಿ ಬಿಜೆಪಿ ಮಂತ್ರಿಗಳು ಗ್ರಾಮಗಳಿಗೆ ಹೋಗುತ್ತಿದ್ದಾರೆ.ಈಗಲಾದರೂ ಇವರಿಗೆ ಹಳ್ಳಿ ನೆನಪಾಗುತ್ತಿದೆಯಲ್ಲಾ ಎಂದು ಮೈಸೂರಿನಲ್ಲಿ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ಗ್ರಾಮಸ್ವರಾಜ್ ಕಾರ್ಯಕ್ರಮವನ್ನ ಲೇವಡಿ ಮಾಡಿದ್ದಾರೆ.
ಚುನಾವಣಾ ನಿಮಿತ್ ಗ್ರಾಮಗಳಿಗೆ ಭೇಟಿ ನೀಡುತ್ತಿದ್ದಾರೆ.ಆದ್ರೆ ಗ್ರಾಮಗಳ ಸಮಸ್ಯೆಗಳ ಬಗ್ಗೆ ಮಾತಾಡುವುದು ನಾನು ಎಲ್ಲಿಯೂ ಕಂಡಿಲ್ಲಾ.ಇನ್ನೂ ಸಿಎಂ ಅವ್ರು ಬೆಳಗಾವಿ ಕೋರ್ ಕಮಿಟಿ ಸಭೆಯಲ್ಲಿ ಭಾಗಿಯಾಗಿದ್ದಾರೆ ಆದ್ರೆ ಬೆಳಗಾವಿ ಜಿಲ್ಲೆಯಲ್ಲಿ ನೆರೆಯಿಂದ ಆಗಿರುವ ನಷ್ಟಕ್ಕೆ ಪರಿಹಾರ ನೀಡಿಲ್ಲಾ ಅವರಿಗೆ ಸಮಸ್ಯೆಕ್ಕಿಂತ ಚುನಾವಣೆ ಮುಖ್ಯವಾಗಿದೆ ಎಂದು ತಿಳಿಸಿದ್ರು.
ಇದು ಅಲ್ಲದೆ ಉಪ ಚುನಾವಣೆ ಬಗ್ಗೆ ಮಾತನಾಡಿದ ಎಚ್.ಡಿ.ಕೆ ಉಪಚುನಾವಣೆಗಳ ಗೆಲುವು ಶಾಶ್ವತ ಅಲ್ಲ,ಸಿದ್ದರಾಮಯ್ಯ ಅವಧಿಯಲ್ಲಿ ನಂಜನಗೂಡು, ಗುಂಡ್ಲುಪೇಟೆ ಉಪಚುನಾವಣೆ ಗೆದ್ದರು.ಆಮೇಲೆ 6 ತಿಂಗಳ ಅಂತರದಲ್ಲಿ ಅದೇ ಕ್ಷೇತ್ರವನ್ನ ಸೋತರು.ಹಾಗಾಗಿ ಉಪಚುನಾವಣೆ ಬೇರೆ ಸಾರ್ವತ್ರಿಕ ಚುನಾವಣೆಗಳು ಬೇರೆ.ಉಪಚುನಾವಣೆಯಲ್ಲಿ ಗೆದ್ದ ತಕ್ಷಣ ಇಡೀ ರಾಜ್ಯ ನಮ್ಮ ಕಡೆ ಇದೆ ಅಂದುಕೊಳ್ಳಬಾರದು ಎಂದು ಬಿಜೆಪಿ ವಿರುದ್ದ ವಾಗ್ದಾಳಿ ನಡೆಸಿದ್ದಾರೆ....
ಬಿಜೆಪಿ ಸರಕಾರದ ವಿರುದ್ದ ಕುಮಾರಸ್ವಾಮಿ ಲೇವಡಿ, ಲೆವಡಿ ಮಾಡಿದ್ದು ಎನ್ ಅಂತಿರಾ..ಇಲ್ಲಿದೆ ಪುಲ್ ಡಿಟೇಲ್.!
Reviewed by News10Karnataka Admin
on
December 04, 2020
Rating:

No comments: